RDPR Karnataka Recruitment 2026: ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಬರುವ ಪಂಚಾಯತ್ ರಾಜ್ ಆಯುಕ್ತಾಲಯವು ಪ್ರಸ್ತುತ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಗ್ರಾಮ ಪಂಚಾಯತಿಗಳನ್ನು ಸಾಮಾಜಿಕ ಕಳಕಳಿಯುಳ್ಳ, ಸ್ಪಂದನಾ ಶೀಲ ಹಾಗೂ ಸಮರ್ಥ ಗ್ರಾಮ ಸರ್ಕಾರಗಳನ್ನಾಗಿ ರೂಪಿಸಲು ಸ್ಥಾಪಿಸಲಾಗಿರುವ ಸಾಮಾಜಿಕವಾಗಿ ಸ್ಪಂದಿಸುವ ಸ್ಥಳೀಯ ಆಡಳಿತ ಕೋಶದಲ್ಲಿ ಕಾರ್ಯನಿರ್ವಹಿಸಲು ಈ ನೇಮಕಾತಿ ನಡೆಯುತ್ತಿದ್ದು, ಆಯ್ದ ಅಭ್ಯರ್ಥಿಗಳಿಗೆ ಅತ್ಯುತ್ತಮ ಮಾಸಿಕ ವೇತನ ಮತ್ತು ಗೌರವಾನ್ವಿತ ಸರ್ಕಾರಿ ವಾತಾವರಣದಲ್ಲಿ ಕೆಲಸ ಮಾಡುವ ಉತ್ತಮ ಅವಕಾಶ ಲಭ್ಯವಿದೆ. ಗ್ರಾಮೀಣಾಭಿವೃದ್ಧಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಒಂದು ಸುವರ್ಣ ಅವಕಾಶವಾಗಿದೆ.
ಉದ್ಯೋಗ ವಿವರ
- ನೇಮಕಾತಿ ಸಂಸ್ಥೆ: ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ
- ಹುದ್ದೆಗಳ ಹೆಸರು: ವಿಷಯ ಪರಿಣಿತರು ಮತ್ತು ಯುವ ವೃತ್ತಿಪರರು
- ಹುದ್ದೆಗಳ ಸಂಖ್ಯೆ: 3
- ಉದ್ಯೋಗ ಸ್ಥಳ: ಬೆಂಗಳೂರು (ಅಗತ್ಯವಿದ್ದಲ್ಲಿ ಕ್ಷೇತ್ರ ಮಟ್ಟದ ಪ್ರಯಾಣ ಇರುತ್ತದೆ)
- ಅರ್ಜಿ ಸಲ್ಲಿಸುವ ಬಗೆ: ಇಮೇಲ್ ಮೂಲಕ ಅಥವಾ ಖುದ್ದಾಗಿ ಕಚೇರಿಗೆ ಸಲ್ಲಿಸುವುದು
ಹುದ್ದೆಗಳ ವಿವರ
- ವಿಷಯ ಪರಿಣಿತರು (Subject Matter Expert): 1 ಹುದ್ದೆ
- ಯುವ ವೃತ್ತಿಪರರು (Young Professionals): 2 ಹುದ್ದೆಗಳು
ವಿದ್ಯಾರ್ಹತೆ
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ನೇಮಕಾತಿ 2026 ರ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ವಿದ್ಯಾರ್ಹತೆ ಮತ್ತು ಅನುಭವವನ್ನು ಹೊಂದಿರಬೇಕು:
- ವಿಷಯ ಪರಿಣಿತರು: ಸಮಾಜ ಶಾಸ್ತ್ರ, ಸಮಾಜ ಕಾರ್ಯ, ಗ್ರಾಮೀಣಾಭಿವೃದ್ಧಿ, ಸಾರ್ವಜನಿಕ ನೀತಿ ಅಥವಾ ಇತರೆ ಯಾವುದಾದರೂ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು. ಇದರೊಂದಿಗೆ ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಟ 5 ರಿಂದ 8 ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಹೊಂದಿರಬೇಕು. ಪಂಚಾಯತ್ ರಾಜ್ ಕಾಯ್ದೆ, ವಿಕೇಂದ್ರೀಕೃತ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಸಮುದಾಯ ಸಹಭಾಗಿತ್ವದಲ್ಲಿ ಯೋಜನೆ ಸಿದ್ಧಪಡಿಸುವ ಜ್ಞಾನವಿದ್ದವರಿಗೆ ಆದ್ಯತೆ ನೀಡಲಾಗುವುದು.
- ಯುವ ವೃತ್ತಿಪರರು: ಸಮಾಜ ಶಾಸ್ತ್ರ, ಸಮಾಜ ಕಾರ್ಯ, ಗ್ರಾಮೀಣಾಭಿವೃದ್ಧಿ, ಸಾರ್ವಜನಿಕ ನೀತಿ ವಿಷಯ ಅಥವಾ ಯಾವುದಾರೂ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು. ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಮಕ್ಕಳು ಮತ್ತು ಮಹಿಳೆಯರು, ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಯಾವುದಾದರೂ ಎರಡು ಕ್ಷೇತ್ರಗಳಲ್ಲಿ ಕನಿಷ್ಟ 2 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
- ಇತರೆ ಅರ್ಹತೆಗಳು: ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡವನ್ನು ಮಾತನಾಡಲು, ಓದಲು ಮತ್ತು ಬರೆಯಲು ತಿಳಿದಿರಬೇಕು ಹಾಗೂ ಇಂಗ್ಲೀಷ್ ಭಾಷೆಯ ಜ್ಞಾನ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ (MS-Word, MS Excel ಮತ್ತು MS-Power Point) ಕಡ್ಡಾಯವಾಗಿ ಇರಬೇಕು.
ವಯೋಮಿತಿ & ವಯೋಮಿತಿಯಲ್ಲಿ ಸಡಿಲಿಕೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ:
- ವಿಷಯ ಪರಿಣಿತರ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಯುವ ವೃತ್ತಿಪರರ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ 35 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
- ವಯೋಮಿತಿ ಸಡಿಲಿಕೆಯ ಕುರಿತು ಇಲಾಖೆಯ ಅಧಿಕೃತ ನಿಯಮಾವಳಿಗಳನ್ನು ಅಧಿಸೂಚನೆಯಲ್ಲಿ ಪರಿಶೀಲಿಸಬಹುದಾಗಿದೆ.
ವೇತನಶ್ರೇಣಿ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ಈ ಕೆಳಗಿನಂತೆ ಆಕರ್ಷಕ ಸಂಭಾವನೆಯನ್ನು ನೀಡಲಾಗುತ್ತದೆ:
- ವಿಷಯ ಪರಿಣಿತರು: ಪ್ರತಿ ತಿಂಗಳು 1,00,000 ರೂಪಾಯಿಗಳು.
- ಯುವ ವೃತ್ತಿಪರರು: ಪ್ರತಿ ತಿಂಗಳು 75,000 ರೂಪಾಯಿಗಳು.
ಅರ್ಜಿ ಶುಲ್ಕ
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಹೊರಡಿಸಿರುವ ಈ ಅಧಿಕೃತ ನೇಮಕಾತಿ ಅಧಿಸೂಚನೆಯಲ್ಲಿ ಯಾವುದೇ ರೀತಿಯ ಅರ್ಜಿ ಶುಲ್ಕದ ಉಲ್ಲೇಖವನ್ನು ನೀಡಿಲ್ಲ. ಅಂದರೆ ಅರ್ಹ ಅಭ್ಯರ್ಥಿಗಳು ಉಚಿತವಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಬಹುದು:
- ಮೊದಲಿಗೆ ಅಭ್ಯರ್ಥಿಗಳು ತಮ್ಮ ಸಂಪೂರ್ಣ ಸ್ವ-ವಿವರಗಳನ್ನು (Resume / CV) ಸಿದ್ಧಪಡಿಸಿಕೊಳ್ಳಬೇಕು.
- ಅರ್ಜಿಯೊಂದಿಗೆ ನಿಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳು, ಅನುಭವದ ಪ್ರಮಾಣ ಪತ್ರಗಳು ಮತ್ತು ವಯಸ್ಸನ್ನು ದೃಢೀಕರಿಸಲು SSLC ಅಂಕಪಟ್ಟಿ ಅಥವಾ ಸರ್ಕಾರದಿಂದ ಅನುಮೋದಿತ ಗುರುತಿನ ಚೀಟಿಯನ್ನು ಲಗತ್ತಿಸಬೇಕು.
- ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ (Envelope) ಹಾಕಿ ಅದರ ಮೇಲೆ ಹುದ್ದೆಯ ಹೆಸರನ್ನು ಬರೆದು “ಪಂಚಾಯತ್ ರಾಜ್ ಆಯುಕ್ತಾಲಯ, ಕಾಳಿದಾಸ ರಸ್ತೆ, ಗಾಂಧಿನಗರ, ಬೆಂಗಳೂರು” ಇಲ್ಲಿಗೆ ಖುದ್ದಾಗಿ ತಲುಪಿಸಬಹುದು.
- ಅಥವಾ ಅಭ್ಯರ್ಥಿಗಳು [email protected] ಇಮೇಲ್ ವಿಳಾಸಕ್ಕೆ ತಮ್ಮ ದಾಖಲೆಗಳ ಸಾಫ್ಟ್ ಪ್ರತಿಯನ್ನು ಕಳುಹಿಸುವ ಮೂಲಕವೂ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.
- ನೆನಪಿಡಿ, ಅರ್ಜಿಗಳು 06.06.2026 ರ ಸಂಜೆ 5.30 ರ ಒಳಗಾಗಿ ಕಚೇರಿಗೆ ತಲುಪಬೇಕು.
ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಈ ಕೆಳಗಿನ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ:
- ನಿಗದಿತ ಅವಧಿಯೊಳಗೆ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ, ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಮತ್ತು ಕೌಶಲ್ಯಗಳನ್ನು ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ.
- ತದನಂತರ ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ (Computer Literacy Test) ನಡೆಸಲಾಗುತ್ತದೆ.
- ಅಂತಿಮವಾಗಿ ಮೌಖಿಕ ಸಂದರ್ಶನದ (Interview) ಮೂಲಕ ಅರ್ಹ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
- ಆಯ್ಕೆಯಾದ ಅಭ್ಯರ್ಥಿಗಳನ್ನು ಆರಂಭದಲ್ಲಿ 31.03.2027 ರ ಹಣಕಾಸು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳ ಕಾರ್ಯಕ್ಷಮತೆ ಮತ್ತು ಸರ್ಕಾರದ ಅನುದಾನದ ಲಭ್ಯತೆ ಆಧರಿಸಿ ಸೇವೆಯನ್ನು ಮುಂದುವರಿಸಲಾಗುತ್ತದೆ.
ಪ್ರಶ್ನೋತ್ತರಗಳು (FAQs)
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ನೇಮಕಾತಿಯಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ?
ಈ ನೇಮಕಾತಿಯಲ್ಲಿ ಒಟ್ಟು 3 ಹುದ್ದೆಗಳಿದ್ದು, ಇದರಲ್ಲಿ 1 ವಿಷಯ ಪರಿಣಿತರು ಹಾಗೂ 2 ಯುವ ವೃತ್ತಿಪರರ ಹುದ್ದೆಗಳು ಖಾಲಿ ಇವೆ.
ಯುವ ವೃತ್ತಿಪರರ ಹುದ್ದೆಗೆ ಗರಿಷ್ಠ ವಯೋಮಿತಿ ಎಷ್ಟು ಇರಬೇಕು?
ಯುವ ವೃತ್ತಿಪರರ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ವಿಷಯ ಪರಿಣಿತರ ಹುದ್ದೆಗೆ ಮಾಸಿಕ ವೇತನ ಎಷ್ಟು ಸಿಗುತ್ತದೆ?
ಆಯ್ಕೆಯಾಗುವ ವಿಷಯ ಪರಿಣಿತರ ಹುದ್ದೆಯ ಅಭ್ಯರ್ಥಿಗೆ ಪ್ರತಿ ತಿಂಗಳು 1,00,000 ರೂಪಾಯಿಗಳ ಗೌರವ ಸಂಭಾವನೆ ಸಿಗುತ್ತದೆ.
ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಅರ್ಜಿಗಳನ್ನು ಇಮೇಲ್ ಅಥವಾ ಖುದ್ದಾಗಿ ಸಲ್ಲಿಸಲು 06.06.2026 ರ ಸಂಜೆ 5.30 ರವರೆಗೆ ಕೊನೆಯ ಅವಕಾಶವಿರುತ್ತದೆ.
ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವನ್ನು ಪಾವತಿಸಬೇಕೇ?
ಇಲ್ಲ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ, ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
| ವಿವರಗಳು | ದಿನಾಂಕಗಳು |
|---|---|
| ಅಧಿಕೃತ ಅಧಿಸೂಚನೆ ಪ್ರಕಟವಾದ ದಿನಾಂಕ | 27.05.2026 |
| ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ | 30.05.2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ | 06.06.2026 (ಸಂಜೆ 5.30 ರವರೆಗೆ) |
- ಕರ್ನಾಟಕ ಅಗ್ನಿಶಾಮಕ ಇಲಾಖೆ ನೇಮಕಾತಿ: 1828 ಹುದ್ದೆಗಳು
- ಕಲ್ಲಿದ್ದಲು ಪ್ರಾಧಿಕಾರದಲ್ಲಿ ವಿವಿಧ ಖಾಲಿ ಹುದ್ದೆಗಳು 11-06-2026
- ಜೆಸ್ಕಾಂ ನೇಮಕಾತಿ 2026 – 05.06.2026
- ರೈಲ್ವೆ ಇಲಾಖೆ ಬೃಹತ್ ನೇಮಕಾತಿ 2026: ಒಟ್ಟು 11,127 ರೈಲು ಚಾಲಕರ ಭರ್ತಿ – 14.06.2026
- ಬರೋಡಾ ಬ್ಯಾಂಕ್ ನಲ್ಲಿ ಹುದ್ದೆಗಳು – 08.06.2026
- KEA ನೇಮಕಾತಿ 2026 FDA SDA ಖಾಲಿ ಹುದ್ದೆಗಳು – 03.06.2026
- SSC CGL ನೇಮಕಾತಿ 2026: 12,256 ಅಸಿಸ್ಟೆಂಟ್ ಮತ್ತು ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಅಹ್ವಾನ – 22-06-2026
- ಬೆಂಗಳೂರು ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ನೇಮಕಾತಿ 2026 – 04.06.2026
- ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ ನೇಮಕಾತಿ 2026 – 20.06.2026
- ಜಿಲ್ಲಾ ಪಂಚಾಯತ್ ನೇಮಕಾತಿ 2026 – 10.06.2026
- ಕೃಷಿ ಇಲಾಖೆಯಲ್ಲಿ 945 ಹುದ್ದೆಗಳಿಗೆ ಅರ್ಜಿ ಅಹ್ವಾನ – 20-06-2026
- ಡಿಸಿಸಿ ಬ್ಯಾಂಕ್ ನೇಮಕಾತಿ 2026 – 30-06-2026
- ಸರ್ಕಾರಿ ಚಾಲಕರ ಹುದ್ದೆಗಳಿಗೆ ಅರ್ಜಿ ಅಹ್ವಾನ – 25.06.2026
ಪ್ರಮುಖ ಲಿಂಕುಗಳು
| ಲಿಂಕ್ ವಿವರಗಳು | ವೆಬ್ಸೈಟ್ ಲಿಂಕ್ |
|---|---|
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ / ಅರ್ಜಿ ಫಾರ್ಮ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |









